ಸೋಮವಾರ, ಅಕ್ಟೋಬರ್ 10, 2011

ವಿರಹ ನಾದ


ಸುರಿವ ಮಳೆ, ಭರದ ಗಾಳಿ
ಮುರಿದ ಕೊಳಲು, ಹರಿದ ತಂತಿ
ಒಡೆದ ಸ್ವರ, ಮರೆತ ಸಾಲು
ಕೊರೆವ ನೆನಪು, ಕೊರಗೊ ಮನಸ್ಸು
ಹದವಾಗಿ ಬೆರೆತು, ಕಲೆತು
ಹರಿದಿದೆ ವಿರಹ ನಾದ
ಅರಿವಿಲ್ಲದೆ ಪಲ್ಲವಿ ಚರಣ ಪಾದ.

ಶರತ್‌ ಚಕ್ರವರ್ತಿ

3 ಕಾಮೆಂಟ್‌ಗಳು: