ಸೋಮವಾರ, ನವೆಂಬರ್ 28, 2011

ನಿತ್ಯ ಸುಮಂಗಲಿ

ನಲುಮೆಯ ನುಡಿಗಳನಾಡುತ
ಪ್ರಣಯ ಚೇಷ್ಟೆಗೈಯ್ಯತ
ಪ್ರೇಮ ರಸಧಾರೆಯನ್ನರಿಸಿಹನು
ನನ್ನಾಸೆಗಳನು ಮೆಟ್ಟಿನಿಂತು
ಮೈಮುರಿದು 
ನನ್ನದೆಲ್ಲ ಅವನದೆಂದೇ ಅಧಿಕಾರಿಸಿಹನು


ಭಿಗುಮಾನದ ಏರಿಳಿತದಲಿ
ತುಂಬಿದೆದೆ ತಲ್ಲಣಿಸಿಹುದು

ಇವನಾಗುವನೇ ಎನ್ನ ಮನದಿನಿಯ
ಹಾರೊಡೆದ ಎದೆಯಲಿ
ಬಂಧಿಸಿದ ಆಸೆಗಂಗಳು ಮುಚ್ಚಿ 
ತೆಲಿಹವು ಕನಸಕೊಳದಲಿ


ರವಿ ಬಂದು ಶ್ಯಾಮ ತೊಲಗಿರೇ 
ಒಂಟಿಯಾಗಿಹುದು ಮೈಮನ 
;ವಾರಸುಧಾರನಿಲ್ಲದೆ
ಕಾದು ಕಾತರಿಸಿಹವು ಕಂಗಳು 
ಸುಮಂಗಲಿಯಾಗುವ ನಿತ್ಯ ಕನಸಿನ ಅಮಲಲಿ

ಖಾಲಿ ಹೊಟ್ಟೆಯಲ್ಲಿ ಕನಸುಗಳ ಮೂಟೆಕಟ್ಟಿ 
ಹಸಿದು ಕಾದವರ ತೃಷೆ ನೀಗಲು 
ಹಾಧರಿಸಿರುವೆ..
ಓ... ತೃಷಿಕನೇ ಕಾಣದೇ 
ನಿನ್ನಲ್ಲೆನ್ನ ಆಂತರ್ಯ ಅಂಗಲಾಚಿಹುದು
ನೀಡು ಗರತಿಯಾಗೋ ಚೈತನ್ಯ.


-ಶರತ್ ಚಕ್ರವರ್ತಿ.

ಶನಿವಾರ, ನವೆಂಬರ್ 19, 2011

ನೀ ಚಂದಿರಳೇ..?

ಎಷ್ಟೇ ಹೊಳಪಿದ್ದರೂ
ಸ್ವಂತಿಕೆಯಿಲ್ಲದ 
ಹುಣ್ಣಿಮೆ ಸೂರ್ಯನ ಪ್ರತಿಫಲನ
ಭಿಂಕದಲಿ ಬೀಗೊ
ನಿನ್ನ ರಾಶಿ ರಾಶಿ 
ಸೌಂದರ್ಯ ನನ್ನ ಕಣ್ಣಗಳ ಪ್ರತಿಫಲನ!

ಶರತ್ ಚಕ್ರವರ್ತಿ.

ಬುಧವಾರ, ನವೆಂಬರ್ 16, 2011

ಮಿಂಚು

ಬೆಳಕಾಗಿ ಬಾ... ಬೆಳದಿಂಗಳಾಗಿ
ಬಾ... ಎಂದು ಹಾಡಿರೇ
ಮಿಂಚಾಗಿ ಬಂದಳು ದೃಷ್ಟಿಯನ್ನೇ
ಹೊತ್ತೊಯ್ದದಳು....!

ಶರತ್ ಚಕ್ರವರ್ತಿ.



ಪತಂಗ

ಸುಟ್ಟು ಬೂದಿಯಾಗುವೆ
ಎಂಬ ಅರಿವಿದ್ದರೂ ಏಕೆ
ಎನ್ನನೇ ಸುತ್ತಿ ಸುತ್ತಿ ಬರುತಿರುವೆ..
ನಿನ್ನ ಕೋಮಲ ರೆಕ್ಕೆಗಳ
ಸುಡುವ ಮನಸ್ಸಿಲ್ಲದೇ
ಇಗೋ ನಾನೇ ನಂದಿಹೋಗುತಿರುವೆ.


ಶರತ್ ಚಕ್ರವರ್ತಿ.


ಚಳಿ

ನವಂಬರ್ ಚಳಿ, ಭಾರವಾದ
ಕಂಬಳಿ ಹೊದೆಯಲು
ಇಚ್ಚಿಸಿರಲು ನಿನ್ನ ನೆನಪುಗಳು
ಬೆಚ್ಚಗೆ ಭಿಗಿದಪ್ಪಿದವು.

ಶರತ್ ಚಕ್ರವರ್ತಿ.
ದಿನಾಂಕ :16.11.2011


ಭೈರಾಗಿ..!

ಬದುಕ ತೊರೆದು 
ಭೈರಾಗಿಯಾಗಲಿರುವೆ
ಹೇಳು ಹುಡುಗಿ...
ಮುಂದೊಂದು ದಿನ
ನಿನ್ನ ಮನೆಯ
ಮುಂದೆ ಕುಳಿತು
'ಭವತೀ ಭಿಕ್ಷಾಂದೇಹಿ'
ಎಂದರೆ 
ನೀ ಏನ ನೀಡುವೆ...?

ನೀ ಕಳೆದ
ಬದುಕಿನುತ್ಸಾಹವ
ಮರಳಿಸುವೆಯ,
ಛಿದ್ರಗೊಂಡ ನನ್ನ
ಹೃದಯವ ಕೂಡಿಸಿ
ಪೋಣಿಸಿ ಕೊಡುವೆಯ
ಅಥವಾ "ತನ್ನಿಂದ
ಇವ ಇಂತಾದನಲ್ಲ"
ಎಂದು ಮರುಗುವೆಯ


ಬೇಡ ಅದಾವುದೂ
ಬೇಡ, ನಾ ಬೇಡಿ
ಬಂದಿರುವೆ ಪ್ರೀತಿಯ
ಸುರಿಸದೇ, ಪ್ರೇಮ
ಮಮತೆಗಳ ಬೆರೆಸದೇ
ಸತ್ತ ನೆನೆಪನು
ತರಿಸದೇ ಮಾಡಿದ
ಮುರುಕು ರೊಟ್ಟಿ

ಅಷ್ಟೇ ಸಾಕು...
ಬದುಕ ತೊರೆದ ಭೈರಾಗಿ ಇವ...!


-ಶರತ್ ಚಕ್ರವರ್ತಿ.
ದಿನಾಂಕ: 16.11.2011

ಶುಕ್ರವಾರ, ನವೆಂಬರ್ 11, 2011

ಚೈತ್ರೋತ್ಸವ..!

ಅದಿನ್ಯಾವ ವಿಪತ್ತಿಗೋ…. ಕಾಣೆ, 
ಒಲವೇನಿನ್ನ ಹಂಬಲಿಸಿ ಎದೆ ಕೂಗಿದೆ 
ಬಾ….. ತಾ ಬದುಕಿಗೆ ನವ ಋತುಮಾನಗಳನೆ
ನಿನ್ನೇಲ್ಲಾಗಳನು ನೋಡಲು ಕಾತರಿತ ನಾ

ಹಸಿರೆಲೆ ಹೂಬಣ್ಣ, ಸುಗಂಧ ತಳಿರು 
ಕಿಲ-ಕಿಲ ಕಲರವಗಳ ಕೂಡಿ 
ಗುನುಗುನಿಸುವ ತರುಣಿಯೇ
ನಿನ್ನಾ ಕುಣಿವ ರೆಪ್ಪೆಗಳಡಿ ಮಿನುಗೋ 
ನವ ಚಿಗುರ ಚೈತ್ರೋತ್ಸವವ ನೋಡಲು ಕಾದಿರುವೆ

ಬಾಳ ಉದ್ಯಾನದಲಿ ಪಾಲ್ಗುಣನು ಹರಡಿದ 
ಹೂ ಎಲೆಗಳ ಹಾದಿಯಲಿ 
ಒಲವೆ ನಿನ್ನೊಡನೆ ಹೆಜ್ಜೆ ಮೂಡಿಸುವಾಗ 
ಮುಳ್ಳೊಂದು ನಿನ ಪಾದವ ಚುಚ್ಚುವ ಮೊದಲು 
ಚುಚ್ಚಿಬಿಡೆಲೆನ್ನ ಕಣ್ಣನೆ

ಮುನಿದು ಕಪ್ಪಾಗಿ ಗುಡುಗಿ ಮಿಂಚಾಗಿ 
ಮುತ್ತಾಗಿ ಮಣಿಯಾಗಿ ಸುರಿದು 
ಎನ್ನ ಅಪ್ಪದಿದ್ದರೂ 
ಬಾ..ಮಳೆಯೇ...! ಎಂದಾಡದೇ 
ಕೊರಗಿ ಕಣ್ಣರಾಗಿ ಹರಿಯದೇ ಕಾಯುತ 
ಧ್ಯಾನಿಸುವೆ ನಿನ್ಹಾದಿಯ

ಹೂಎಲೆಗಳುದುರಿ ಭೂಮಿಬಿರಿದು ಬಾಯ್ತೆರೆದು
ಒಲವ ಋತುಮಾನಗಳೆಲ್ಲವೂ ಕಳೆದಿರಲು

ಮತ್ತೊಂದು ಚೈತ್ರಕೆ ಕಾಯದೇ ಉದುರೋ ಹೂವಂತೆ 
ಉದುರಿ ಮಣ್ಣಾಗಿ ಮರೆಯಾಗುವೆ.

-ಶರತ್ ಚಕ್ರವರ್ತಿ.
ದಿನಾಂಕ: 11.11.11
ಫೋಟೋ ಕೃಪೆ: ಗೌರೀಶ್ ಕಪನಿ.