ಶುಕ್ರವಾರ, ನವೆಂಬರ್ 11, 2011

ಚೈತ್ರೋತ್ಸವ..!

ಅದಿನ್ಯಾವ ವಿಪತ್ತಿಗೋ…. ಕಾಣೆ, 
ಒಲವೇನಿನ್ನ ಹಂಬಲಿಸಿ ಎದೆ ಕೂಗಿದೆ 
ಬಾ….. ತಾ ಬದುಕಿಗೆ ನವ ಋತುಮಾನಗಳನೆ
ನಿನ್ನೇಲ್ಲಾಗಳನು ನೋಡಲು ಕಾತರಿತ ನಾ

ಹಸಿರೆಲೆ ಹೂಬಣ್ಣ, ಸುಗಂಧ ತಳಿರು 
ಕಿಲ-ಕಿಲ ಕಲರವಗಳ ಕೂಡಿ 
ಗುನುಗುನಿಸುವ ತರುಣಿಯೇ
ನಿನ್ನಾ ಕುಣಿವ ರೆಪ್ಪೆಗಳಡಿ ಮಿನುಗೋ 
ನವ ಚಿಗುರ ಚೈತ್ರೋತ್ಸವವ ನೋಡಲು ಕಾದಿರುವೆ

ಬಾಳ ಉದ್ಯಾನದಲಿ ಪಾಲ್ಗುಣನು ಹರಡಿದ 
ಹೂ ಎಲೆಗಳ ಹಾದಿಯಲಿ 
ಒಲವೆ ನಿನ್ನೊಡನೆ ಹೆಜ್ಜೆ ಮೂಡಿಸುವಾಗ 
ಮುಳ್ಳೊಂದು ನಿನ ಪಾದವ ಚುಚ್ಚುವ ಮೊದಲು 
ಚುಚ್ಚಿಬಿಡೆಲೆನ್ನ ಕಣ್ಣನೆ

ಮುನಿದು ಕಪ್ಪಾಗಿ ಗುಡುಗಿ ಮಿಂಚಾಗಿ 
ಮುತ್ತಾಗಿ ಮಣಿಯಾಗಿ ಸುರಿದು 
ಎನ್ನ ಅಪ್ಪದಿದ್ದರೂ 
ಬಾ..ಮಳೆಯೇ...! ಎಂದಾಡದೇ 
ಕೊರಗಿ ಕಣ್ಣರಾಗಿ ಹರಿಯದೇ ಕಾಯುತ 
ಧ್ಯಾನಿಸುವೆ ನಿನ್ಹಾದಿಯ

ಹೂಎಲೆಗಳುದುರಿ ಭೂಮಿಬಿರಿದು ಬಾಯ್ತೆರೆದು
ಒಲವ ಋತುಮಾನಗಳೆಲ್ಲವೂ ಕಳೆದಿರಲು

ಮತ್ತೊಂದು ಚೈತ್ರಕೆ ಕಾಯದೇ ಉದುರೋ ಹೂವಂತೆ 
ಉದುರಿ ಮಣ್ಣಾಗಿ ಮರೆಯಾಗುವೆ.

-ಶರತ್ ಚಕ್ರವರ್ತಿ.
ದಿನಾಂಕ: 11.11.11
ಫೋಟೋ ಕೃಪೆ: ಗೌರೀಶ್ ಕಪನಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ