ಬುಧವಾರ, ಸೆಪ್ಟೆಂಬರ್ 28, 2011

ಭಾವಬಂಧನ.


ಓ... ಒಲವ ಮಾರಿಯೇ....!
ಇನ್ನೆಷ್ಟು ನಿನ್ನ ಸಾಮ್ರಾಜ್ಯಶಾಹಿ ವಾಂಛೆ..

ಮುಗಿದಿಲ್ಲವೇ ಹಸಿ ಮುಗ್ಧ ಹೃದಯಗಳ
ಮೇಲೆ ನಿನ್ನ ನಿಷ್ಕಾರುಣ್ಯ ಆಕ್ರಮಣ..

ಸಾಲದಾಯಿತೆ ಎಳೆ ಮನದ ತಿಳಿ ಪನ್ನಿರ
ಕೊಳವ ರಕ್ತಸಿಕ್ತ ಕೆನ್ನೀರಾಗಿಸಿದ್ದು..

ನಿನ್ನ ಸೆರೆಯೊಳು ವಿಷ-ಪಾನಮತ್ತರಾಗಿ ಬಾಳ
ಹಾದಿಯ ಕಳೆದರೂ ತೀರಲಿಲ್ಲವೇ ನಿನ್ನ ಅರಿಕೆ..

ಮನದ ಅಪಸ್ವರಗಳಿಗೆಲ್ಲ ಕಾರಣೀಭೂತವಾದ
ನಿನ್ನ ಸದ್ದಿಲ್ಲದ ನಡಿಗೆ ಏಕಿಂದು ನನ್ನೊಳು..

ಸಾಕು ನಿಲ್ಲಿಸು ನಿನ್ನೀ ವಶೀಕರಣ, ಓ ಒಲ್ಲದ
ಒಲವೇ ಆಗಿರುವೆ ನಿನ್ನೊಳು ಭಾವಬಂಧನ.


ಶರತ್‌ ಚಕ್ರವರ್ತಿ.

2 ಕಾಮೆಂಟ್‌ಗಳು: