ಮಂಗಳವಾರ, ಡಿಸೆಂಬರ್ 4, 2012

ಕವಿತೆಯೆಂದರೆ..

ಕವಿತೆಯೆಂದರೆ ಮಾತು; ಚಂದದ ಮಾತು
ಮಾತಿಗಿಂತ ಮೌನ ಚಂದ
ಹಾಗಾದರೇ ಮೌನವೊಂದು ಕವಿತೆಯೇ!?

ಸ್ವರ ಕರಗಿ ಶೃತಿ ಮರೆತು

ಲಯ ಕಾಣದೇ ಹರಿದರೂ
ಮೌನವು ಚಂದವೇ
ಎಲ್ಲಿಯೂ ಉಕ್ಕದೇ
ಕೆಲವೆಡೆಯಲ್ಲೂ ಬಿಕ್ಕದೇ
ಕ್ಷಿತಿಜದ ಹೊಳಹು ಹೊಳೆಯದ
ಮೌನವೂ ಕೂಡ ಚಂದವೇ
; ಚಂದದ ಕವಿತೆಯೇ!?

ಮುತ್ತಾಗಿಸೋ ಮಾತು ಹರಿದು

ಕೂಡಿ ಕವಿತೆಯಾಗುವ ಸಲುವೆ
ಮೌನದ ಕುತ್ತಿಗೆ ಹಿಸುಕಿರೇ
ಉದುರಿವೆ ಮಾತುಗಳು
ಮುತ್ತುಗಳು; ಚಂದದ ಕವಿತೆಗಳು

ಹರಡಿ ತಿವಿದು ಹುಡುಕದಿರಿ

ಶೃತಿ - ಲಯ - ತಾಳ
ಬೆತ್ತಲ ಸಿರಿಯೇ ಅಂದ
ಸಿಂಗಾರದ ಸೊಬಗಿಗಿಂತ.


-ಶರತ್ ಚಕ್ರವರ್ತಿ.
16-06-12

2 ಕಾಮೆಂಟ್‌ಗಳು: